ಸೋಮವಾರ, ಸೆಪ್ಟೆಂಬರ್ 10, 2012

ಹನಿ'ಸಿಕೆಗಳು 
**********
ಅವರು ಕೊಲೆ ಮಾಡಿದ 
ಸಂಖ್ಯೆ;ನೂರು.
ಇವರು ಕರೆ ಮಾಡಿದ 
ಸಂಖ್ಯೆ;ನೂರು.
*******
ಉಪ್ಪಿನುಗಮಕೆ ಬೇಕು
ನೀಲತೊಯದುದಕ
ಯಾವ ಉದಕವಾದರೂ ಸರಿ,
ಉಪ್ಪು ಸಾಯುವುದಕ
******
ಎಷ್ಟು ಸೊಗಸಾಗಿ
ಬರೆಯುತ್ತಾರಲ್ಲ,
ಕನ್ನಡ ಕವಿ;ನಿಸಾರ್.
ಅವರ ಕಾವ್ಯದ ಶಕ್ತಿ
ನಮ್ಮ ಬರಹಕೆ ಇಲ್ಲ
ನಮ್ಮದೋ..ಬರೀ ನಿಸ್ಸಾರ
*******
ತಾತ,ಅಪ್ಪ,ಮಗ
ಈ ಮೂವರಿಗೂ ವಿದ್ಯೆ
ತಲೆಗೆ ಹತ್ತಲಿಲ್ಲ.
ಸಾಗಿ ಬಂದಿವೆ ಹೀಗೇ..
ಮೂರು ತಲೆಮಾರು.
ಇಂಥ ತಲೆಗಳನಿಟ್ಟುಕೊಂಡು
ಏನು ಮಾಡುವುದು?
ಮೂರೂ..ತಲೆ ಮಾರು.
- ಗುರುನಾಥ ಬೋರಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ