ಶನಿವಾರ, ಸೆಪ್ಟೆಂಬರ್ 8, 2012

ಕೆಂಡವಾಗುತ್ತದೆ ಮನಸು
**********************

ಉಂಡ ಬಾಳೆಲೆ ಮೇಲೆ
ಹಿಂಡು ದೇಹಗಳುರುಳಿಸಿ
ಅಘ ನೀಗಿತು ಎಂದು
ಬೊಗಳುವವರ ಕಂಡು...
ಕೆಂಡವಾಗುತ್ತದೆ ಮನಸು..//

ಆವುದರಿಯದ ಕನ್ನೆ

ದೇಹ ಬೆತ್ತಲೆಗೊಳಿಸಿ
ಬೇವು ಸೊಪ್ಪನು ಬೀಸಿ
ಉಧೋ ಎನ್ನುವವರ ಕಂಡು..
ಕೆಂಡವಾಗುತ್ತದೆ ಮನಸು..//

ಆಡೋ ಹಸುಳೆಯ ತಂದು
ಸುಡುವ ಅನ್ನದಲದ್ದಿ
ಕೇಡು ಓಡಿತು ಎಂದು
ಜೈ ಎನ್ನುವವರ ಕಂಡು..
ಕೆಂಡವಾಗುತ್ತದೆ ಮನಸು..//
-ಗುರುನಾಥ ಬೋರಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ